Posts

Showing posts from December, 2025

ಶ್ರೀಮದ್ಭಗವದ್ಗೀತೆ (ಕನ್ನಡ) ಶ್ರೀವ್ಯಾಸರಾಯರು

  #ಶ್ರೀವ್ಯಾಸರಾಯರು ಶ್ರೀಮದ್ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿರುವ ಸಾರವನ್ನು ತೆಗೆದು ಹದಿನೆಂಟು ನುಡಿಗಳಲ್ಲಿ ಕನ್ನಡದ ಪದ್ಯ ರೂಪದಲ್ಲಿ ರಚಿಸಿದರು. ನಿತ್ಯ ಪಾರಾಯಣ ಮಾಡುವವರಿಗೆ ಸಂಸ್ಕೃತವನ್ನರಿಯದ ಸುಜೀವಿಗಳಿಗೆ ಪಠಿಸಲು ನೀಡಿದರು, ಅದು ಅತ್ಯಂತ ಸ್ವಾರಸ್ಯವಾಗಿದೆ. ಶ್ರೀಮದ್ಭಗವದ್ಗೀತೆ (ಕನ್ನಡ) ಕೇಳಯ್ಯ ಎನ ಮಾತು ಪಾರ್ಥನೇ ಗೀತಾದರ್ಥನೇ ಕುರುಕ್ಷೇತ್ರದೀ | ಎನ್ನುವರು ಪಾಂಡವರು | ಪೇಳೋ ಸಂಜಯ | ಏನು ಮಾಡುವರು ಕೂಡೀ || ಕೇಳೈ ಆರಸನೇ | ನೋಡು ಪಾಂಡವರಸೇ ನಾ! ಮಾತಾಡಿದ ನಿನ್ನ ಸುತಗೆ ದ್ರೋಣನಿಂದು ||೧|| ಕೇಳಿತಾ ಪಾರ್ಥನು ಕುರುದಂಡ | ರಣದಲಿಚಂಡ | ಗಾಂಡೀವ ಕರದಂಡ ! ಆಚ್ಯುತ ಪಿಡಿರಥ ನಡೆ ಮುಂದೆ | ಬಹುತ್ವರದಿಂದೇ | ನೋಡುವೆ ನೇತ್ರದಿಂದ | ಗುರುಹಿರಿಯರ ಕೂಡಯಾಕೆಂದ | ಯುದ್ಧ ಸಾಕೆಂದ | ಭಿಕ್ಷವೇ ಲೇಸೆಂದಾ ಕುಂತಿಸುತ ಈ ಮಾತು ಉಚಿತವಲ್ಲ | ನಿನಗಿದಸಲ್ಲ | ಪಿಡಿಗಾಂಢೀವ ಬಿಲ್ಲಾ||೨|| ಬಾಲ್ಯಯವ್ವನ ಮುಪ್ಪು ತನದೇಹವಲ್ಲಿ ಇಂಥ ದೇಹಕೆ ಮೋಹ ಮತ್ಯಾತಕಲ್ಲಿ ಕಾಯ್ದು ಕೊಲ್ಲುವ ನಾನು ಇರುತಿರಲು ಇಲ್ಲಿ ಬಿಲ್ಲುಪಿಡಿದು ಕೀರ್ತಿ ಪಡೆ ಲೋಕದಲ್ಲಿ ||೩|| ಶಸ್ತ್ರದಂಜಿಕೆಯಿಲ್ಲ ಜೀವಕ್ಕೆ| ಈ ದೇಹಕ್ಕೆ ಪಾವಕನ ದಾಹಕ್ಕೆ | ಉದಕಗಳಿಂದ ವೇದನೆ ಯಾಕೆ | ಈ ಜೀವಕ್ಕೆ | ಮಾರುತನ ಶೋಷಕ್ಕೆ | ನಿತ್ಯ ಅಭೇದ್ಯತಾ ಜೀವನ | ಸನಾ ತನ | ವಸ್ತ್ರದ್ಧಾಂಗೆ ಈ ತನವು ! ಆದಾವು ಪೋದಾವು ನನಗಯ್ಯಾ |ಅದನಾಬಲ್ಲೆನಯ್ಯಾ||೪|| ಜ್ಞಾನದೊಡ್ಡದು | ಕರ್ಮಬಂ...